• Home
  • About Us
    • Haveri District Police
    • Our Officers
    • Past SPs
    • Photo Gallery
    • Haveri District Map
  • Organization
    • District Police Office
    • Organizational Setup
    • Haveri Sub – Division
    • Ranbennur Sub – Division
    • Shiggavi Sub – Division
  • Traffic
    • Traffic Rules
    • Traffic Fines
    • Traffic Signals
  • Know about
    • District Armed Reserve
    • District Crime Record Bureau
    • District Crime Intelligence Bureau
    • District Special Branch
    • Cyber Economic and Narcotic Crime Police Station
    • Circulars
  • Services
    • District Police Complaint Authority
    • Police Seva Portal
    • Police Verification Certificate
    • SAKALA Services
    • Police Clearance Certificate
    • Passport
  • RTI
  • FAQ
  • Contact Us

Daily News

ಹಾವೇರಿ ಜಿಲ್ಲಾ ಪೊಲೀಸ್
ಅಪರಾಧಗಳ ಸುದ್ದಿ

ದಿನಾಂಕ: 25-01-21


ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:06/2021 ಮಹಿಳೆ ಕಾಣೆ.

                ಸುಮಾ ರಾಮಚಂದ್ರಪ್ಪ ಬಸಣ್ಣನವರ ಸಾ ರಾಣೆಬೇನ್ನೂರ ಇವಳು ದಿನಾಂಕ: 21-01-2021 ರಂದು ಮುಂಜಾನೆ 11-30 ಗಂಟೆ ಸುಮಾರಿಗೆ ಮನೆಯಿಂದ ಹೊರಗೆ ಬಟ್ಟೆ ಸೇಳೆಯಲು ಹೋಗುತ್ತೇನೆ ಅಂತಾ ಹೋದವಳು ಹೇಳದೇ ಕೇಳದೇ ಎಲ್ಲಿಯೋ ಹೋಗಿರುತ್ತಾಳೆ. ಅವಳು ಹೋಗಿರುವುದಕ್ಕೆ ಲೋಕೇಶ ಬಸವರಾಜ ಸಿದ್ದಪ್ಪನವರ ಹಾಗೂ ಅವನ ಕಡೆಯ ಇನ್ನೂ 6-7 ಜನರ ಮೇಲೆ ಅನುಮಾನ ವಿರುತ್ತದೆ. ಪುಟ್ಟವ್ವ ಪಿರ್ಯದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಸವಣೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:12/2021 ಕಲಂ: 279,304(A) IPC.

                 ದಿನಾಂಕ: 25-01-2021 ರಂದು  ಸಂಜೆ 7-00 ಗಂಟೆಯ ಸುಮಾರಿಗೆ ಸವಣೂರ- ಬಂಕಾಪುರ ರಸ್ತೆ ತೆಗ್ಗಿಹಳ್ಳಿ ಸಮೀಪ ಹಳ್ಳದ ಹತ್ತಿರ ರಸ್ತೆಯ ತಿರುವಿನಲ್ಲಿ ರಸ್ತೆಯ ಮೇಲೆ ಬಸವರಾಜ ಶಿವಪ್ಪ ಗುಡಗೇರಿ ಸಾ ನಂದಳ್ಳಿ ತಾನು ನಡೆಸುತ್ತಿದ್ದ ಮೋಟಾರ ಸೈಕಲ್ ನಂಬರ; ಕೆ.ಎ.27 ಇ.ಎಫ್.585 ನೇದ್ದನ್ನು ತೆಗ್ಗಿಹಳ್ಳಿ ಕಡೆಯಿಂದ ಬಂಕಾಪುರ ಕಡೆಗೆ ಜೋರಾಗಿ ಅಲಕ್ಷತನದಿಂದ ಜನರಿಗೆ ಅಪಾಯವಾಗುವಂತೆ ನಡೆಸಿಕೊಂಡು ತನ್ನ ಮುಂದೆ ಎರಡು ಟೇಲರಗಳಲ್ಲಿ ಕಬ್ಬನ್ನು ಲೋಡಮಾಡಿಕೊಂಡು ಹೊರಟಿದ್ದ ಟ್ರ್ಯಾಕ್ಟರನ್ನು ಓವರ್ ಟೇಕ್ ಮಾಡಲು ಹೋದಾಗ ಎದುರಿನಿಂದ ಯಾವುದೋ ಒಂದು ಗಾಡಿಯು ಬಂದಿದ್ದರಿಂದ ಬಸವರಾಜ ತನ್ನ ಮೋಟಾರ ಸೈಕಲನ್ನು ಟ್ರ್ಯಾಕ್ಟರ ಕಡೆಗೆ ತೆಗೆದುಕೊಂಡು ಒಮ್ಮಲೇ ಬ್ರೇಕ್ ಹಾಕಿದ್ದರಿಂದ ಮೋಟಾರ ಸೈಕಲ್ ಸ್ಕಿಡ್ಡಾಗಿ ಬಿದ್ದಿದ್ದರಿಂದ ಟ್ರ್ಯಾಕ್ಟರದ ಹಿಂದಿನ ಟೇಲರದ ಹಿಂದಿನ ಗಾಲಿಯಲ್ಲಿ ಬಿದ್ದಾಗ ಟ್ರೇಲರದ ಗಾಲಿಯು ತಲೆಯ ಮೆಲೆ ಹತ್ತಿ ತಲೆಯು ಪೂರ್ಣ ಚಪ್ಪಟೆಯಾಗಿಯಾಗುವಂತೆ ಮಾಡಿಕೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:21/2021 ಕಲಂ: 279, 337, 338, 304(A) IPC.

                 ಹಾನಗಲ್ಲ ಪೊಲೀಸ್ ಠಾಣಾ ಹದ್ದಿ ಪೈಕಿ ದಿನಾಂಕಃ-25/01/2021 ರಂದು ಸಾಯಂಕಾಲಃ05-30 ಗಂಟೆಯ ಸುಮಾರಿಗೆ ಹಾಲಿನ ಟ್ಯಾಂಕರ್ ವಾಹನ ಸಂಬರಃಕೆಎ-51/ಬಿ9085 ನೇದ್ದರ ಚಾಲಕನು ತಾನು ನಡೆಸುತ್ತಿದ್ದ ಟ್ಯಾಂಕರ್ ನ್ನು  ಬೆಳಗಾಲಪೇಟೆ ಕಡೆಯಿಂದ ಕಾಡಶೆಟ್ಟಿಹಳ್ಳಿ ಕಡೆಗೆ ಅತೀ ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಎದುರಿಗೆ ಕಾಡಶೆಟಿಹಳ್ಳಿ ಕಡೆಯಿಂದ ಬೆಳಗಾಲಪೇಟೆ ಕಡೆಗೆ ಬರುತ್ತಿದ್ದ ಮೋಟಾರ್ ಸೈಕಲ್ ನಂಬರಃಕೆಎ-22 ಇವ್ಹಿ-5762 ನೇದ್ದಕ್ಕೆ ಡಿಕ್ಕಿಪಡಿಸಿ ಅಪಘಾತಪಡಿಸಿ ಮೋಟಾರ್ ಸೈಕಲ್ ಮೇಲೆ ಸವಾರಿ ಮಾಡುತ್ತಿದ್ದ ಮೂರು  ಜನರಿಗೆ ಮೋಟಾರ್ ಸೈಕಲ್ ಸಮೇತ ಕೆಳಗೆ ಬೀಳುವಂತೆ ಮಾಡಿ ಮೋಟಾರ್ ಸೈಕಲ್ ಚಲಾಯಿಸುತ್ತಿದ್ದ ಮಲ್ಲಿಕರೇಹಾನ್ ಹುಲಿಕಟ್ಟಿ ಈತನಿಗೆ ಬಲಗಡೆ ಮೆಲಕಿಗೆ ಬಲಗೈ ರಟ್ಟೆಗೆ, ಮೂಗಿಗೆ, ಎರೆಡೂ ತೊಡೆಗಳಿಗೆ ಭಾರಿ ಸ್ವರೂಪದ ರಕ್ತಗಾಯವಾಗುಂತೆ ಮಾಡಿದ್ದು ಅಲ್ಲದೇ ಮೋಟಾರ್ ಸೈಕಲ್ ಹಿಂದೆ ಕುಳಿತು ಸವಾರರಾದ ಜಿಯಾವುಲ್ಲಾ ಹುಲಿಕಟ್ಟಿ ಈತನ ಬಲಗಾಲ ತೊಡೆಗೆ ಭಾರಿ ಸ್ವರೂಪದ ರಕ್ತಗಾಯ ಪಡಿಸಿ ಕಾಲು ಮುರಿಯುವಂತೆ ಮಾಡಿದ್ದು ಅಲ್ಲದೇ ಇನ್ನೊಬ್ಬ ಉದಯ ಈತನ ಬಲಗಾಲ ಮೊಣಕಾಲಿಗೆ ರಕ್ತಗಾಯಪಡಿಸಿದ್ದು ನಂತರ ಮೂರು ಜನ ಗಾಯಾಳುಗಳನ್ನು ಉಪಚಾರಕ್ಕೆ ಹಾನಗಲ್ಲ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಉಪಚಾರಕ್ಕೆ ದಾಖಲು ಮಾಡಿ ಉಪಚಾರವನ್ನು ಕೊಡಿಸಿ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರಕ್ಕೆ ದಾಖಲು ಮಾಡಿದಾಗ ಇದರಲ್ಲಿಯ ಗಾಯಾಳುಗಳ ಪೈಕಿ ಮೋಟಾರ್ ಸೈಕಲ್ ಸವಾರನಾದ ಮಲ್ಲಿಕರೇಹಾನ್ ತಂದೆ ಮೌಲಾಸಾಬ ಹುಲಿಕಟ್ಟಿ ಈತನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಉಪಚಾರದಲ್ಲಿ ಉಪಚಾರ ಫಲಿಸದೇ ಮರಣ ಹೊಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಲಗೇರಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:03/2021 ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ.

                 ಪ್ರಮೀಳಾ ಕೋಂ ಬಸನಗೌಡ ಕಲ್ಲಪ್ಪಗೌಡ್ರ, ವಯಸ್ಸು: 55 ವರ್ಷ, ಜಾತಿ: ಹಿಂದೂ-ಲಿಂಗಾಯತ, ವೃತ್ತಿ: ಮನೆಕೆಲಸ ಮತ್ತು ವರದಿದಾರನ ಅಣ್ಣ ಶಿವನಗೌಡ ತಂದೆ ಬಸನಗೌಡ ಕಲ್ಲಪ್ಪಗೌಡ್ರ ವಯಸ್ಸು: 31 ವರ್ಷ ಸಾ: ಇಬ್ಬರೂ ಬೆನಕನಕೊಂಡ ಇವರಿಬ್ಬರೂ ತಾವು ಹೊಸದಾಗಿ ತಂದ ಟಾಟಾ ಹಿಟಾಚಿ ವಾಹನಕ್ಕೆ ದುಡಿಮೆ ಇಲ್ಲದೇ ಇರುವುದರಿಂದ ಇಬ್ಬರೂ ಮಾನಸಿಕ ಮಾಡಿಕೊಂಡು ಜಿಗುಪ್ಸೆಗೊಂಡು ತಮ್ಮಷ್ಟಕ್ಕೆ ತಾವೆ ದಿನಾಂಕ-21/01/2021 ರಂದು ಸಾಯಂಕಾಲ 07:00 ಗಂಟೆ ಸುಮಾರಿಗೆ ಅನ್ನದಲ್ಲಿ ಬೆಳೆಗಳಿಗೆ ಹೊಡೆಯುವ ಔಷದಿಯನ್ನು ಕಲಸಿಕೊಂಡು ಊಟಮಾಡಿ ಅಸ್ಥವ್ಯಸ್ಥರಾದಾಗ ಅವರಿಗೆ ಉಪಚಾರಕ್ಕೆ ರಾಣೇಬೆನ್ನೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಹೆಚ್ಚಿನ ಉಪಚಾರಕ್ಕೆ ಇಬ್ಬರನ್ನು ಡಾವಣಗೇರಿ ಬಾಪೂಜಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದಾಗ ದಿನಾಂಕ: 25-01-2021 ರಂದು ಬೆಳಗ್ಗಿನ ಜಾವ 03-00 ಗಂಟೆಯ ಸುಮಾರಿಗೆ ನಮ್ಮ ತಾಯಿ ಪ್ರಮೀಳ ಕೋಂ ಬಸನಗೌಡ ಕಲ್ಲಪ್ಪಗೌಡ್ರ ಇವರಿಗೆ ಉಪಚಾರ ಪಲೀಸದೇ ಮರಣ ಹೊಂದಿದ್ದು ಇರುತ್ತದೆ. ನಮ್ಮ ತಾಯಿಯ ಸಾವಿನಲ್ಲಿ ಯಾವುದೇ ಸಂಶಯ ವಗೈರೆ ಯಾರ ಮೇಲು ಇರುವುದಿಲ್ಲಾ ಅಂತಾ ಮೃತಳ ಮಗನು ವರದಿ ನೀಡಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಯಿಸಿದ್ದು ಇರುತ್ತದೆ.

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:04/2021 ವ್ಯಕ್ತಿ ಸಾವು.

                 ಸಿದ್ದಪ್ಪ ತಿರಕಪ್ಪ ಬತಡಿ ಸಾ|| ರಾಣೆಬೇನ್ನೂರ ಇವರು ದಿನಾಂಕ: 24-01-2021 ರಂದು ರಾತ್ರಿ 11-00 ಗಂಟೆ ಸುಮಾರಿಗೆ ತಮ್ಮ ಮನೆಯವರೊಂದಿಗೆ ಮಾತನಾಡಿದ ನಂತರ ಮನೆಯಲ್ಲಿಯೇ ಮಲಗಿದವರು ದಿನಾಂಕ: 25-01-2021 ರಂದು ರಾತ್ರಿ 00-30 ಗಂಟೆ ಸುಮಾರಿಗೆ ಜೋರಾಗಿ ಗೊರಕೆ ಹೊಡೆಯುತ್ತಾ ಮಾತನಾಡಿಸಿದರೂ ಮಾತನಾಡದೇ ಕಣ್ಣು ತೆರೆಯದೇ ಇದ್ದುದರಿಂದ ಉಪಚಾರಕ್ಕೆ ರಾಣೇಬೆನ್ನೂರು ಸರಕಾರಿ ಆಸ್ಪತ್ರೆಗೆ ಕರೆತಂದಾಗ ರಾತ್ರಿ 2-00 ಗಂಟೆಗೆ ಸುಮಾರಿಗೆ ಮೃತಪಟ್ಟಿದ್ದು ಹೃದಯಾಘಾತದಿಂದ ಮೃತಪಟ್ಟಿರುತ್ತಾರೆ ಅವರ ಸಾವಿನಲ್ಲಿ ಯಾರ ಮೇಲೆಯೂ ಸಂಶಯ ಇರುವುದಿಲ್ಲ ಅಂತಾ ಮೃತನ ಹೆಂಡತಿ ರತ್ನಮ್ಮ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:05/2021 ವ್ಯಕ್ತಿ ಸಾವು.

                 ಜಗಧೀಶ ಹಿರೇಮಠ ಇವರು ವಿಪರೀತ ಮಧ್ಯಪಾನ ಮಾಡುವ ಚಟ ಕಲಿತು ಎಷ್ಟು ಹೇಳಿದರೂ ಯಾರ ಮಾತನನ್ನು ಕೇಳದೇ ಬ್ಯಾಡಗಿ, ರಾಣೇಬೆನ್ನೂರು ಗಳಲ್ಲಿ ಕೂಲಿ ಹಾಲಿ ಕೆಲಸ ಮಾಡುತ್ತಾ ಅದರಿಂದ ಬಂದ ಹಣದಿಂದ ಮಧ್ಯಪಾನ ಮಾಡುತ್ತಾ ದಿನಾಂಕ: 24-01-2021 ರಂದು ಮದ್ಯಾಹ್ನ 04-00 ಗಂಟೆಯಿಂದ ಸಾಯಂಕಾಲ 19-00 ಗಂಟೆಯ ನಡುವಿನ ಅವಧಿಯಲ್ಲಿ  ರಾಣೇಬೆನ್ನೂರು ಅಭಿಲಾಷಾ ಬಾರ ಹತ್ತಿರ ರಸ್ತೆಯ ಬದಿಯಲ್ಲಿ  ಮೃತಪಟ್ಟಿರುತ್ತಾರೆ ಅವರ ಸಾವಿನಲ್ಲಿ ಯಾರ ಮೇಲೆಯೂ ಸಂಶಯ ಇರುವುದಿಲ್ಲ ಅಂತಾ ಮಮತಾ ವರಿದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಬ್ಯಾಡಗಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:07/2021 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.

                 ಉಜ್ಜಪ್ಪ ತಂದೆ ಈರಪ್ಪ ಓಲೇಕಾರ ವಯಾ-68 ವರ್ಷ. ಸಾ-ರಾಮಗೊಂಡನಹಳ್ಳಿ ಇವರು ತಮ್ಮ ಬಾಬತ್ತ್ ಜಮೀನು ರಿ.ಸ.ನಂ:32/1 30/2 ಕ್ಷೇತ್ರ 06ಎಕರೆ-30ಗುಂಟೆ ಜಮೀನಿಗೆ 2-3 ವರ್ಷಗಳಿಂದ ಅಲ್ಲ-ಅಲ್ಲಿ ಕೈಗಡ 2ಲಕ್ಷ ರೂ ಸಾಲ ಹಾಗೂ ಈ ವರ್ಷ ವಿಜಯಾ ಬ್ಯಾಂಕ್ ನಲ್ಲಿ 1 ಲಕ್ಷ 80 ಸಾವಿರ ಬೆಳೆ ಸಾಲ ಮಾಡಿದ್ದು ಈಗ 3-4ವರ್ಷಗಳಿಂದ ಮಳೆಯು ಬಾರದೇ ಹಾಗೂ ಅತಿಯಾದ ಮಳೆ ಯಾಗಿದ್ದರಿಂದ ಬಿತ್ತಿದ ಪೀಕು ಬಾರದೇ ಬಂದ ಪೀಕು ಲುಕ್ಸಾನ್ ಆಗಿದ್ದರಿಂದ ಮಾಡಿದ ಸಾಲವನ್ನು ಹೇಗೆ ತೀರಿಸುವದು ಅಂತಾ ಮಾನಸಿಕ ಮಡಿಕೊಂಡು ತನ್ನಷ್ಟಕ್ಕೆ ತಾನೇ ಮುಂಜಾನೆ 09-00 ಘಂಟೆ ಸುಮಾರಿಗೆ ನಮ್ಮ ಮನೆಯ ಎತ್ತಿನ ಮನೆಯಲ್ಲಿ ಯಾವುದೋ ವಿಷಕಾರಕ ಎಣ್ಣೆ ಕುಡಿದು ಉಪಚಾರಕ್ಕೆ ಕರೆದುಕೊಂಡು ಹೋಗುವಾಗ ಮದ್ಯಾಹ್ನ 01-00 ಘಂಟೆಗೆ ಮರಣ ಹೊಂದಿರುತ್ತಾನೆ. ವಿನಃ ಅವನ ಮರಣದಲ್ಲಿ ಬೇರೆ ಸಂಶಯ ಇರುವದಿಲ್ಲ ಅಂತಾ ಮೃತನ ಮಗ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

© 2017 Haveri District Police. All rights reserved

Design by W3layouts