• Home
  • About Us
    • Haveri District Police
    • Our Officers
    • Past SPs
    • Photo Gallery
    • Haveri District Map
  • Organization
    • District Police Office
    • Organizational Setup
    • Haveri Sub – Division
    • Ranbennur Sub – Division
    • Shiggavi Sub – Division
  • Traffic
    • Traffic Rules
    • Traffic Fines
    • Traffic Signals
  • Know about
    • District Armed Reserve
    • District Crime Record Bureau
    • District Crime Intelligence Bureau
    • District Special Branch
    • Cyber Economic and Narcotic Crime Police Station
    • Circulars
  • Services
    • District Police Complaint Authority
    • Police Seva Portal
    • Police Verification Certificate
    • SAKALA Services
    • Police Clearance Certificate
    • Passport
  • RTI
  • FAQ
  • Contact Us

Daily News

ಹಾವೇರಿ ಜಿಲ್ಲಾ ಪೊಲೀಸ್
ಅಪರಾಧಗಳ ಸುದ್ದಿ

ದಿನಾಂಕ: 27-01-21


ಸವಣೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:14/2021 ಕಲಂ:  279, 338, 304(A) IPC.

                ದಿನಾಂಕ: 27-01-2021 ರಂದು 16-30  ಗಂಟೆ ಸುಮಾರಿಗೆ ಇದರಲ್ಲಿ ನಮೂದ ಮಾಡಿದ ಆರೋಪಿತನು ತಾನು ನಡೆಸುತ್ತಿದ್ದ ಟಿಪ್ಪರ್ ಲಾರಿಯ ನಂಬರ ಕೆ,ಎ-18 / ಸಿ.0744  ನೇದ್ದನ್ನು ಯಲವಿಗಿ ಕಡೆಯಿಂದ ಸವಣೂರ ಕಡೆಗೆ ವೇಗವಾಗಿ ನಿರ್ಲಕ್ಷತನದಿಂದ ಜನರಿಗೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ತನ್ನ ಎದುರಿನಿಂದ ಅಂದರೆ ಸವಣೂರ ಕಡೆಯಿಂದ ರಸ್ತೆಯ ಸೈಡಿನಲ್ಲಿ ಬರುತ್ತಿದ್ದ  ಮೋಟಾರ ಸೈಕಲ್ ನಂಬರ ಕೆ,ಎ-27 /ಇ.ಪಿ-3346 ನೇದ್ದಕ್ಕೆ ಎದುರಿನಿಂದ ಡಿಕ್ಕಿ ಮಾಡಿ ಅಪಘಾತ ಮಾಡಿ ಮೋಟಾರ ಸೈಕಲ್ ಸವಾರ ಸೈಯದ್ಅಜಮತ್ತವುಲ್ಲಾ ತಂದೆ ಸೈಯದ್ಅಸ್ಲಾಂ ಮಕಾಂದರ ವಯಾ; 19 ವರ್ಷ ಇವನ ತಲೆಗೆ ಮೈಕೈಗಳಿಗೆ  ಬಲವಾದ ರಕ್ತಗಾಯ ಪಡಿಸಿದ್ದು ಅಲ್ಲದೇ ಮೋಟಾರ ಸೈಕಲ್  ಹಿಂದೆ ಕುಳಿತ ಹಜರತ್ಅಲಿ ತಂದೆ ಆಲಂಖಾನ ಖಾನಜಾದೆ  ವಯಾ; 36 ವéರ್ಷ ಇವನಿಗೆ ತಲೆಗೆ ಮೈಕೈಗಳಿಗೆ ಬಲವಾದ ರಕ್ತಗಾಯವನ್ನು ಪಡಿಸಿ ಸ್ಥಳದಲ್ಲಿಯೇ ಮರಣ ಹೊಂದುವಂತೆ ಮಾಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಬ್ಯಾಡಗಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:08/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.

                 ಕದರಮಂಡಲಗಿ ಗ್ರಾಮದ ಹೊನ್ನಪ್ಪ ತಂದೆ ಹನಮಂತಪ್ಪ ನಾಯ್ಕರ ಇವರು ತಮ್ಮ ಬಾಬತ್ತ್ ಜಮೀನು 2 ಎಕರೆ- ಮತ್ತು ತಮ್ಮ ಅಣ್ಣನ 2 ಎಕರೆ ಜಮೀನು ಮತ್ತು ಬಸವರಾಜ ನಾಯ್ಕರ ಇವರ 2 ಎಕರೆ ಜಮಿನು ಬಿತ್ತನೆ ಸಂಬಂದ ಕದರಮಂಡಲಗಿ ಕೆ.ವ್ಹಿ.ಜಿ ಬ್ಯಾಂಕ್ ನಲ್ಲಿ 2.60.000 /-ರೂ ಸಾಲ ಮತ್ತು ಅಲ್ಲಲ್ಲಿ ಕೈಗಡ 2-3 ಲಕ್ಷ  ರೂ ಸಾಲ ಮಾಡಿದ್ದು ಹೋದ ವರ್ಷ ಮತ್ತು ಈ ವರ್ಷ ಅತಿಯಾಗಿ ಮಳೆಯಾಗಿದ್ದರಿಂದ ಬಂದ ಪೀಕು ನೀರಿನಲ್ಲಿ ಕೊಚ್ಚಿ ಹೋಗಿದ್ದರಿಂದ ಮತ್ತು ಕೊಳೆ ರೋಗ ಬಂದು ಲುಕ್ಷಾನ್ ಆಗಿದ್ದರಿಂದ ಕೃಷಿಗಾಗಿ ಮಾಡಿದ ಸಾಲವನ್ನು ಹೇಗೆ ತೀರಿಸುವದು ಅಂತಾ ಮಾನಸಿಕ ಮಾಡಿಕೊಂಡು ಅದೇ ಚಿಂತೆಯಲ್ಲಿ ದಿನಾಂಕ;27-01-2021 ರಂದು ಮುಂಜಾನೆ 05-00 ಘಂಟೆಯಿಂದ ಮುಂಜಾನೆ 07-00 ಘಂಟೆ ನಡುವಿನ ಅವಧಿಯಲ್ಲಿ  ತಾನು ವಾಸವಿದ್ದು ಬಸವರಾಜ ತಂದೆ ಮಹೇಶಪ್ಪ ನಾಯ್ಕರ ಇವರ ಮನೆಯಲ್ಲಿ ಸೊಳ್ಳೆ ಪರದೆಯಿಂದ ಮನೆಯ ತೊಲೆಗೆ ನೇಣು ಹಾಕಿಕೊಂಡು ಮರಣ ಹೊಂದಿರುತ್ತಾನೆ ವಿನಃ ಅವನ ಮರಣದಲ್ಲಿ ಬೇರೆ ಯಾವ ಸಂಶಯ ಇರುವದಿಲ್ಲ ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಮೃತನ ಹೆಂಡತಿ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

© 2017 Haveri District Police. All rights reserved

Design by W3layouts